ಕನ್ನಡ ಜೈಮಿನಿ ಭಾರತ ಸಟೀಕಾ ಅನುವಾದ
ಕನ್ನಡ ಜೈಮಿನಿ ಭಾರತ ಸಟೀಕಾ ಅನುವಾದ. * ಪ್ರಸ್ತಾವನೆ * ಶ್ರೀಮದಖಂಡ ಭೂಮಂಡಲ ಮಂಡನಾಯಮಾನವಾಗಿರುವ ಕರ್ಣಾಟಕದೇಶ ಕಮಲಾಕರಕ್ಕೆ ಕಮಲದಂತಿರುವ ಶ್ರೀ ಮನ್ಮಹೀಶ್ವರ ಸಂಸ್ಥಾನದ ಸೀಮೆಯೊಳಗಣ ಬಾಣಾವಾರದ ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿ, ತನ್ನಯ ವಿದ್ಯಾವೈದುಷ್ಯದಿಂದ ಕನ್ನಡ ಕವಿಕುಲಲಲಾಮನೆಂದು ಲೋಕವಿಖ್ಯಾತಿಯಂ ಪಡೆದ ಲಕ್ಷ್ಮೀಶನೆಂಬ ಮಹಾಕವಿಯು ಕನ್ನಡಿಗರ ಸೌಭಾಗೋದಯದಂತೆಸೆವ ಜೈಮಿನಿ ಭಾರತಂ' ಎಂಬ ಒಂದು ಲೋಕೋತ್ತರವಾದ ಪದ್ಯ ಪ್ರಬಂಧ ವನ್ನು, ಈಗ್ಗೆ ಸುಮಾರು ೨೧೦ ವರ್ಷಗಳ ಹಿಂದೆ ರಚಿಸಿರುವಂತೆ ಕಾಸನಗಳೇ ಮುಂತಾದವುಗಳಿಂದ ತಿಳಿದು ಬರುತ್ತದೆ. ಈ ಸುಪ್ರಸಿದ್ಧ ಕಾವ್ಯದ ಗುಣಗಾಂಭೀರವೇ ಆ ಮಹಾಕವಿಯ ಮತ್ತು ಆ ಮಹಾಕಾವ್ಯದ ಮಹಿಮೆಗೆ ಕನ್ನಡಿಯಾ ಪದ ಲಾಲಿತ್ಯ, ಅರ್ಥಗಾಂಭೀರ್, ಮಾಧುರ, ಶೈಲಿ, ಸರಸತೆ, ಸಾರಸ್ಯ, ಅರ್ಥ ಚಮತ್ತಿ, ಭಾವವೈಚಿತ್ಯ), ಅಲ೦ಕ ವೈಖರಿ, ಗುಣಪರಿಪಾಟ, ಭಾವೋದಯಕ್ಕಿಕೆ, ಕಾವ್ಯತೆ ಮುಂತಾದವುಗಳನ್ನು ಎಷ್ಟು ಕೊಂಡಾಡಿದರೂ ಸಾಲದು, ಕನ್ನಡ ಕಾವ್ಯಾಂ ಮೃತವನ್ನು ಪಾನಮಾಡಬೇಕೆಂದು ಬಯಸುವ ಕನ್ನಡಿಗರಿಗೆ ಇಂತಹ ಅಮೃತನಿಧಿಯು ಮತ್ತೊಂದಿಲ್ಲ. ಪಟ್ಟಣ, ಗ್ರಾಮ, ಊರು, ಹಳ್ಳಿ ಮೊದಲಾದವುಗಳಲ್ಲಿಯೂ ಈ ಪ್ರಬಂಧವನ್ನು ಓದಿ, ಕೇಳಿ ಆನಂದಿಸದವರೇ ಇಲ್ಲ. ಈ ಸು೦ದರಕಾವ್ಯದ ಸವಿಯು ಭಾಷಾಜ್ಞಾನವನ್ನು ಹೆಚ್ಚಾಗಿ ಪಡೆಯುವವರಿಗೆ ಬಹುತರವಾದ ಸಹಾಯವಾಗಿದೆ. ಇದಲ್ಲದೆ ಸರ್ವಜ್ಞನು, ಸರ್ವ ಶಕ್ತನು, ಕರುಣಾಸಮುದ್ರನೂ ಆಗಿರುವ ಭಗವಂತನ ಮತ್ತು ಭಾಗವತ